ಇದೊಂದು ಮಾಸ್ ಹಾಗೂ ಪವರ್ಫುಲ್ ಶೀರ್ಷಿಕೆ ಇರುವ ಚಿತ್ರ. ೭ ಸ್ಟಾರ್ಸ್ ಎಂಟರ್ಟೈನ್ಮೆಂಟ್ ಸ್ಟುಡಿಯೋ ಅಡಿಯಲ್ಲಿ ಭಾರ್ಗವ ಅವರ ನಿರ್ಮಾಣದ ಚಿತ್ರ ಶಶಾಂಕ್ ರಾಜ್ ಅವರ ನಿರ್ದೇಶನದಲ್ಲಿ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ.
ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ಬಳ್ಳಾರಿಯ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ಬಹಳ ಪ್ರಸಿದ್ಧಿ ಪಡೆದು ಕೊಂಡಿದೆ. ಸುಮಾರು ೨೦ ಲಕ್ಷ ಭಕ್ತಾದಿಗಳು ವಿವಿಧ ಪ್ರದೇಶಗಳಿಂದ ಬಂದು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇದುವರೆವಿಗೂ ಯಾವುದೇ ಕನ್ನಡ ಸಿನೆಮಾ ಆ ನೈಜ ಜಾತ್ರೆಯನ್ನು ಚಿತ್ರೀಕರಿಸಿಕೊಂಡಿಲ್ಲ. ಆ ಕೆಲಸವನ್ನು ‘ಗೂಳಿ ಹಟ್ಟಿ’ ಸಿನೆಮಾ ಮಾಡಿದೆ.
ಪವನ್ ಸೂರ್ಯ, ತೇಜಸ್ವಿನಿ, ದೊಡ್ಡಣ್ಣ, ಆದಿ ಲೋಕೇಶ್, ಸುಧ ಬೆಳವಾಡಿ, ಮಮತ ರಾವತ್, ಅಮನ್, ರಾಘವೇಂದ್ರ, ಮಹೇಶ್, ಅಪ್ಪು ವೆಂಕಟೇಶ್, ರಂಗಾಯಣ ರಘು, ಅವಿನಾಷ್, ಶರತ್ ಲೋಹಿತಾಶ್ವ, ಶರತ್ ಚಂದ್ರ, ಸ್ವಯಂವರ ಚಂದ್ರು, ಮೈಕೊ ನಾಗರಾಜ್, ಲಕ್ಷ್ಮಿ ದೇವಮ್ಮ, ರಿಶಿಕುಮಾರ ಸ್ವಾಮೀಜಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಆರ್ ವಿ ನಾಗೇಶ್ವರ ರಾವ್ ಅವರ ಛಾಯಾಗ್ರಹಣ, ಶ್ರೀ ಮಂಜು ಅವರ ಸಂಗೀತ. ಬಾಬು ಖಾನ್ ಅವರ ಕಲೆ, ಅಲ್ಟಿಮೇಟ್ ಶಿವು, ಕುಂಗ್ ಫೂ ಚಂದ್ರು ಅವರ ಸಾಹಸ, ಕಲ್ಯಾಣ್, ನಾಗೇಂದ್ರ ಪ್ರಸಾದ್, ಬಂಗಿರಂಗ, ಶಶಾಂಕ್, ತ್ಯಾಗರಾಜ್ ಅವರ ಸಾಹಿತ್ಯ ‘ಗೂಳಿ ಹಟ್ಟಿ’ಗಿದೆ.